ಪದ್ಮನಾಭಸ್ವಾಮಿ ದೇವಾಲಯ

ಪದ್ಮನಾಭಸ್ವಾಮಿ ದೇವಾಲಯ

ಭೂಮಿಯಮೇಲೆ ಅದೆಷ್ಟೋ ದೇವಾಲಯಗಳಿವೆ ಆ ಎಲ್ಲ ದೇವಾಲಯಗಳು ತನ್ನದೇ ಆದ ವಿಶಿಷ್ಟ ಕಥೆ,  ವಿಭಿನ್ನತೆ, ಮತ್ತು ನಿಗೂಢತೆಯನ್ನ ಹೊಂದಿರುತ್ತವೆ.  ಅಂತದ್ದೇ ಸಾಲಿಗೆ ಸೇರುವಂತಹ ಅದ್ಭುತ ದೇವಾಲಯದ ಬಗ್ಗೆ ನಾವಿವತ್ತು ಹೇಳೋದಕ್ಕೆ ಹೋಗ್ತಾ ಇದೀವಿ..  ಈ ದೇವಸ್ಥಾನದಲ್ಲಿರೋ ಕೋಣೆಯ ಬಾಗಿಲನ್ನ ಒಂದು ಸೂಪರ್ ನ್ಯಾಚುರಲ್ ಶಕ್ತಿ ಕಾಯ್ತಾ ಇದೆ ಅಂದ್ರೆ ಎಂತ ಆಶ್ಚರ್ಯ ಅಲ್ವ?  1880 ರ ದಶಕದಿಂದಲೂ ಈ ಬಾಗಿಲು ತೆಗೆಯೋದಿಕ್ಕೆ ಸಾಧ್ಯ ಆಗಿಲ್ಲ,  ಆದಾಗಿಯೂ ತೆಗೆಯೋದಿಕ್ಕೆ ಟ್ರೈ ಮಾಡಿದೋರು ಅರ್ಧಕ್ಕೆ ಬಿಟ್ಟಿದ್ಯಾಕೆ?   ಈ ರೀತಿ ನಿಗೂಢ ಕಥೆ ಹೊಂದಿರೋ ಆ ದೇವಸ್ಥಾನ ಯಾವುದು ಅನ್ಕೊಂಡ್ರಾ ಭಾರತ ದೇಶದ ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂನಲ್ಲಿರುವ ವಿಷ್ಣುವಿಗೆ ಸಮರ್ಪಿತವಾದ ಪದ್ಮನಾಭಸ್ವಾಮಿ ದೇವಾಲಯ.  (Padmanabhaswamy Temple)

 

ಬನ್ನಿ ಈ ದೇವಾಲಯದ ಸಂಪೂರ್ಣ ಇತಿಹಾಸವನ್ನು ನಾವಿವತ್ತು ತಿಳ್ಕೊಳೋಣ… (The complete history of the temple)  ಶ್ರೀ ವೈಷ್ಣವ ಸಂಪ್ರದಾಯದಲ್ಲಿ ವಿಷ್ಣುವಿನ ಪವಿತ್ರ ವಾಸಸ್ಥಾನ ಅಂತಲೇ ಪರಿಗಣಿಸಲಾದ  108 ದಿವ್ಯ ದೇಶಗಳಲ್ಲಿ ಇದು ಕೂಡ ಒಂದು.  ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಈ ನಗರವನ್ನ “ಅನಂತ ನಗರ” ಅಂತ ಹೇಳಲಾಗುತ್ತದೆ. 16 ನೇ ಶತಮಾನದ ಗೋಪುರವನ್ನು ಹೊಂದಿದ ಈ ದೇವಾಲಯ ಕೇರಳ ಶೈಲಿ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಮಿಶ್ರಣದಲ್ಲಿ ನಿರ್ಮಾಣ ಮಾಡಲಾಗಿದೆ,  ಇದನ್ನು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ .

ಇಲ್ಲಿನ ಪ್ರಧಾನ ದೇವರು ಪದ್ಮನಾಭಸ್ವಾಮಿ “ಅನಂತಶಯನ” ಭಂಗಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ವಿಷ್ಣುವಿನ ಒಂದು ರೂಪ, ಶೇಷ ಎಂಬ ಸರ್ಪ ಪರ್ವತದ ಮೇಲೆ ಶಾಶ್ವತ ಯೋಗ ನಿದ್ರೆಯಲ್ಲಿ ತೊಡಗಿದ್ದಾನೆ,  ಎನ್ನುವ ಸಂಕೇತವಾಗಿದೆ ಈ ದೇವರು , ಪದ್ಮನಾಭಸ್ವಾಮಿ ತಿರುವಾಂಕೂರು ರಾಜಮನೆತನದ ಪೋಷಕ ದೇವರು.  ಈ ದೇವಾಲಯವನ್ನ ವಿಷ್ಣು ಪುರಾಣ  ,ಬ್ರಹ್ಮ ಪುರಾಣ,  ಮತ್ಸ್ಯ ಪುರಾಣ,  ವರಾಹ ಪುರಾಣ ,  ಸ್ಕಂದ ಪುರಾಣ, ಪದ್ಮ ಪುರಾಣ,  ವಾಯು ಪುರಾಣ,  ಭಾಗವತ ಪುರಾಣ ಮತ್ತು ಮಹಾಭಾರತ ಸೇರಿದಂತೆ ಹಲವಾರು ಹಿಂದೂ ಗ್ರಂಥಗಳು ಪದ್ಮನಾಭಸ್ವಾಮಿ ದೇವಾಲಯವನ್ನು ಉಲ್ಲೇಖಿಸುತ್ತವೆ.  9 ನೇ ಶತಮಾನದ ತಮಿಳು ಕವಿ-ಸಂತರಾದ ನಮ್ಮಲ್ವಾರ್ ಅವರ ನಂತರದ ಕೃತಿಗಳು ದೇವಾಲಯ ಮತ್ತು ನಗರ ಶುದ್ಧ ಚಿನ್ನದ ಗೋಡೆಗಳನ್ನು ಹೊಂದಿವೆ ಎಂದು ಉಲ್ಲೇಖಿಸುತ್ತವೆ.  ದೇವಾಲಯ ಮತ್ತು ಇಡೀ ನಗರ ಎರಡನ್ನೂ ಹೆಚ್ಚಾಗಿ ಚಿನ್ನದಿಂದ ಮಾಡಲ್ಪಟ್ಟಿದೆ  ಮತ್ತು ದೇವಾಲಯವನ್ನು ಸ್ವರ್ಗವೆಂದು ಸ್ತುತಿಸಲಾಗುತ್ತದೆ,  ಅಂತ ಹೇಳಲಾಗಿದೆ.

ತಿರುವಾಂಕೂರು ರಾಜಮನೆತನ (Travancore Royal Family)

ಈ ರಾಜಮನೆತನದ ಏಕೈಕ ಆಡಳಿತಗಾರ ತಿರುವಾಂಕೂರು ರಾಜಮನೆತನವೇ ಆಗಿತ್ತು, ಸಾಮ್ರಾಜ್ಯವನ್ನು ಆಳುತ್ತಿದ್ದ ಏಕೈಕ ಆಡಳಿತಗಾರರಾಗಿದ್ದರು.  ತಿರುವಾಂಕೂರು ರಾಜಮನೆತನವು 1663 ರಿಂದ 1949 ರವರೆಗೆ ರಾಜಪ್ರಭುತ್ವ ರಾಜ್ಯವನ್ನು ಆಳ್ವಿಕೆ ಮಾಡಿತು.  ಭಾರತದ ಸ್ವಾತಂತ್ರ್ಯದ ನಂತರ ತಿರುವಾಂಕೂರು ಭಾರತ ಸರ್ಕಾರದೊಂದಿಗೆ ವಿಲೀನಗೊಳ್ಳಲು ಒಪ್ಪಿಕೊಂಡಿದ್ದರಿಂದ 1949 ರಲ್ಲಿ ತಿರುವಾಂಕೂರು ರಾಜಮನೆತನದ ಆಳ್ವಿಕೆ ಕೊನೆಗೊಂಡಿತು.   2011 ರಲ್ಲಿ,  ಭಾರತೀಯ ಹೈಕೋರ್ಟ್ ದೇವಾಲಯದ ಎಲ್ಲಾ ಕಸ್ಟಡಿಯಲ್ ಹಕ್ಕುಗಳನ್ನು ತಿರುವಾಂಕೂರು ರಾಜಮನೆತನ ಕುಟುಂಬಕ್ಕೆ ನೀಡಬೇಕು ಎಂದು ಘೋಷಣೆ ಮಾಡಿತು.   ಶ್ರೀ ಚಿತ್ತಿರ ತಿರುನಾಳ್ ಬಲರಾಮ ವರ್ಮ ರಾಜಮನೆತನದ ದೇವಾಲಯದ ಕೊನೆಯ ಆಡಳಿತಗಾರರಾಗಿದ್ದರು.   ಜುಲೈ 2020 ರಲ್ಲಿ ಸುಮಾರು ಒಂದು ದಶಕ ಕಳೆದಿದ್ದು,  ಸುಪ್ರೀಂ ಕೋರ್ಟ್ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಆಡಳಿತವನ್ನು ತಿರುವಾಂಕೂರು ರಾಜಮನೆತನ ವಹಿಸಿಕೊಳ್ಳಬೇಕೆಂದು ತೀರ್ಪು ನೀಡಿದೆ.

ಪದ್ಮನಾಭಸ್ವಾಮಿ ದೇವಾಲಯದ ರಹಸ್ಯ ಕೋಣೆಗಳು…

ಈ ದೇವಾಲಯದಲ್ಲಿ ಒಟ್ಟು 6 ರಹಸ್ಯ ಕೋಣೆಗಳಿವೆ,  ಅವುಗಳಿಗೆ ಎ, ಬಿ, ಸಿ, ಡಿ, ಇ ಮತ್ತು ಎಫ್ ಎಂದು ಹೆಸರಿಡಲಾಗಿದೆ.  ಅದರಲ್ಲಿ ಈಗಾಗಲೇ  5 ಬಾಗಿಲುಗಳನ್ನು ತೆರೆಯಲಾಗಿದೆ,  2011 ರಲ್ಲಿ,  ಅಧಿಕಾರಿಯೊಬ್ಬರು ದೇವಾಲಯದ ಖಜಾನೆಯನ್ನು ತನಿಖೆ ಮಾಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ, ಭಾರತದ ಸುಪ್ರೀಂ ಕೋರ್ಟ್ ಕಮಾನುಗಳನ್ನು ತೆಗೆಯೋದಿಕ್ಕೆ ಆದೇಶ ಮಾಡಿತು.   ಏಳು ಸದಸ್ಯರ ಸಮಿತಿಯೊಂದು ಕೋಣೆಗಳನ್ನ ತೆಗೆದು ನೋಡಿದಾಗ ಇದು ಅಂದಾಜು $22  ಬಿಲಿಯನ್ ಮೌಲ್ಯದ ಸಂಪತ್ತನ್ನು ಒಳಗೊಂಡಿತ್ತು,   ಚಿನ್ನದ ವಿಗ್ರಹಗಳು,  ಚಿನ್ನದ ಆನೆಗಳು,  18 ಅಡಿ ಎತ್ತರದ ವಜ್ರದ ಹಾರಗಳನ್ನು ಧರಿಸಿದ ವಿಗ್ರಹಗಳು,  ಚಿನ್ನದ ನಾಣ್ಯಗಳ ಚೀಲಗಳು,  ಸಮಾರಂಭದ ವೇಷಭೂಷಣಗಳು,  ಚಿನ್ನದ ಸಿಂಹಾಸನಗಳು,  ಕಿರೀಟಗಳು ಮತ್ತು ಆಭರಣಗಳು ಸಿಕ್ಕವು. 

B ಕೋಣೆಯ ರಹಸ್ಯ

B ಕೋಣೆಯ ರಹಸ್ಯ ಇನ್ನೂವರೆಗೂ ತೆಗೆಯಲು ಸಾಧ್ಯವಾಗದ ಒಂದೇ ಒಂದು ಬಾಗಿಲು ಅಂದ್ರೆ ಅದು B ಕೋಣೆ.   ಇದು ಪದ್ಮನಾಭಸ್ವಾಮಿ ದೇವರಿಗೆ ಹೆಚ್ಚು ಸಂಬಂಧ ಹೊಂದಿದೆ,   ಅಲ್ಲದೆ ಬಾಗಿಲು ತೆಗೆಯೋದ್ರಿಂದ ವಿಪತ್ತು ಸಂಭವಿಸುತ್ತವೆ ಅಂತ ಹೇಳಲಾಗುತ್ತದೆ.   ಇನ್ನು ಕೆಲವರು ನಂಬೋದು ಏನಂದ್ರೆ,  ಸಂತರು ನಾಗಪಾಶ ಮಂತ್ರವನ್ನು ಹೇಳೋ ಮೂಲಕ ಬಾಗಿಲನ್ನ ಮುಚ್ಚಿದ್ದಾರೆ ಎಂದು ಹೇಳುತ್ತಾರೆ.  ಈ ಬಾಗಿಲನ್ನ ಉಕ್ಕಿನಿಂದ ಮಾಡಿದ್ದು,  ಅದರ ಮೇಲೆ ಎರಡು ದೊಡ್ಡ ನಾಗರ ಹಾವುಗಳನ್ನು ಮತ್ತು ಯಕ್ಷಿಯ ಕೆತ್ತನೆಗಳಿಂದ ರಕ್ಷಿಸಲಾಗಿದೆ.   ಈ ಕೋಣೆಯ ಬಾಗಿಲಿಗೆ ಯಾವುದೇ ಲಾಚ್‌ಗಳು, ಬೋಲ್ಟ್‌ಗಳು ಅಥವಾ ಇತರ ಪ್ರವೇಶ ಮಾರ್ಗಗಳು ಇಲ್ಲ.   ಈ ಬಾಗಿಲನ್ನು ಯಾವದೋ ಸೂಪರ್ ನ್ಯಾಚುರಲ್ ಶಕ್ತಿ ಕಾವಲು ಕಾಯ್ತಾ ಇದೆ ಎಂದು ನಂಬಲಾಗಿದೆ.
“ಗರುಡ ಮಂತ್ರ”ವನ್ನು ಹೇಳೋಕೆ ತಿಳಿದಿರೋ ಉನ್ನತ ಮಟ್ಟದ ಸಾಧುಗಳಿಂದ ಮಾತ್ರ ಈ ಬಾಗಿಲು ತೆಗೆಯೋದಿಕ್ಕೆ ಸಾಧ್ಯ ಎಂದು ಹೇಳಲಾಗುತ್ತಿದೆ.   ಒಂದು ವೇಳೆ ಮಾನವ ಯಾವದಾದರೂ technology ಬಳಸಿಕೊಂಡು ಬಾಗಿಲು ತೆಗೆಯೋದಿಕ್ಕೆ ಟ್ರೈ ಮಾಡಿದ್ರೆ,  ಭಾರತ ದೇಶದ ಜೊತೆಗೆ ಇಡೀ ಪ್ರಪಂಚದಲ್ಲಿ ವಿಪತ್ತುಗಳು ಉಂಟಾಗಬಹುದು ಅಂತ ಹೇಳ್ತಾರೆ.  ಇನ್ನೂ ಕೆಲವು ದಂತಕಥೆಗಳ ಪ್ರಕಾರ ಈ ಬಾಗಿಲು ಅರೇಬಿಯನ್  ಸಮುದ್ರಕ್ಕೆ ಸಂಬಂಧ ಹೊಂದಿದೆ ಅಂತಾ ಹೇಳ್ತಾರೆ,   ಮತ್ತೆ ಕೆಲವರು ಇದನ್ನು ತೆರೆಯುವುದರಿಂದ ಪ್ರವಾಹ ಉಂಟಾಗಬಹುದು ಅಂತಾ ನಂಬುತ್ತಾರೆ.   ಬಾಗಿಲಿನ ಇತಿಹಾಸ – ಒಮ್ಮೆ ದೇವಾಲಯದ ನಿರ್ವಹಣಾ ಟೀಮ್ ಬಾಗಿಲು ತೆಗೆಯಲು ಪ್ರಯತ್ನ ಮಾಡ್ತು,  ಆದರೆ ಅಲೆಗಳ ಶಬ್ದ ಕೇಳಿ ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಂಡರು.  ಇನ್ನು 1930 ರಲ್ಲಿ, ಕಳ್ಳರ ಗುಂಪೊಂದು ದೇವಾಲಯವನ್ನು ಕಳ್ಳತನ ಮಾಡೋದಿಕ್ಕೆ ಪ್ರಯತ್ನ ಮಾಡಿದಾಗ ಹಾವುಗಳು ಅವರ ಕಡೆಗೆ ಬರ್ತಾ ಇರೋದನ್ನ ನೊಡಿದ್ರಂತೆ,  ಇದನ್ನೆಲ್ಲಾ ನೋಡಿ ರಾಜಮನೆತನದವರು ಸೇರಿ ಚರ್ಚೆ ಮಾಡಿ ಜ್ಯೋತಿಷ್ಯದ ಆಧಾರದ ಮೇಲೆ ಕೊಠಡಿಯನ್ನು ಓಪನ್ ಮಾಡಬಾರದು ಎಂದು ಖಾಸಗಿ ನಿರ್ಧಾರವನ್ನು ತೆಗೆದುಕೊಂಡರು.  ಕೊನೆಗೆ 2020 ರಲ್ಲಿ, ಸುಪ್ರೀಂ ಕೋರ್ಟ್ B ಕೋಣೆಯನ್ನ ಓಪನ್ ಮಾಡೋದಿಕ್ಕೆ permission ಕೊಡೋದಿಲ್ಲ.
ನೋಡಿದ್ರಲ್ಲಾ ಪ್ರಪಂಚದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನ ಹಲವಾರು ರಹಸ್ಯಗಳನ್ನ ತನ್ನಲ್ಲಿ ಅಡಗಿಸಿಕೊಂಡಿದೆ. ಇಂತಹ ಅಚ್ಚರಿಗಳನ್ನು ತಿಳಿದುಕೊಳ್ಳಬೇಕು ನಿಜ ಆದರೆ ಅದರಿಂದ ಮುಂದೆ ಏನಾಗುತ್ತೆ ಎನ್ನುವ ಅರಿವಿರಬೇಕು…

    Leave A Comment

    Top